ನೆನಪುಗಳ ಭಗ್ನ ಗೋಪುರ,
ಮೇಲೆಕಹಿ ನೋವುಗಳ ಗಾಳಿ..
ಹೂಂಕರಿಸಿದ ಬಾಂಬುಗಳು,
ಛಿದ್ರಗೊಂಡ ದೇಹಗಳು..
ನಾಚಿಕೆಯಿಲ್ಲದ ಕ್ಯಾಮರಾ ಕಣ್ಣುಗಳು.
ಹೋದವರು ಬಂದವರು,
ಕೊಟ್ಟ ಹೇಳಿಕೆಗಳು ಹಲವಾರು.
ಎಗ್ಗೆಯಿಲ್ಲದ ನಾಲಿಗೆಗಳು..
ಸ್ವಾರ್ಥ ಬೇಳೆಯ ರಾಜಕೀಯ,
ರಕ್ತದೋಕುಳಿಯ ಮೇಲೆ ಬೆಂದುಎದ್ದಿದ್ದು ಕರಿಮೋಡ..
ವಷರ್ಾಂತ್ಯದಲ್ಲಿ ಸಂಭವಿಸಿದ ದುರಂತ,
ನೆರಳಿನಲ್ಲಿ ಸರಿವ ವರ್ಷಕ್ಕೆಕಣ್ಣೀರ ಹಿನ್ನುಡಿ..
ಹಾಗಾದರೆ...
ಹೊಸವರ್ಷಕ್ಕೆ ಮುನ್ನುಡಿ..?
ಯುದ್ಧ ಭಯ..? ಹೊತ್ತಿ ಉರಿಯುವ ಅಜ್ಜ..?
ಆಗಮಿಸುವ ಚುನಾವಣೆ..? ಪೊಳ್ಳು ರಾಜಕೀಯ..?
ಕೋಮು-ದಳ್ಳುರಿ..? ಅಥವಾ...!
ಹೊಸವರ್ಷದಲ್ಲಿ ನಿರೀಕ್ಷಿಸಬಹುದೆಏನನ್ನಾದರೂ ಹೊಸತು..?
ಕಾಲಜ್ಞಾನಿಯ ಒಳಮರ್ಮವ ಅರಿವವರಾರು..
ನವ ಮುಂಜಾನೆ ಹೊತ್ತು ತರಬಹುದೇ,
ಇಬ್ಬನಿ ಚಳಿಯ ನಡುವೆ ಹೊಸ ಆಕಾಂಕ್ಷೆ..?
ಏನೋ ಆಸೆ, ಆದರೂ ಗಾದೆಮಾತು
'ಅತಿಯಾಸೆ ಗತಿಗೇಡು'
ಜೊತೆಗೆ ದಾಸಮಾತು
'ಬಂದದ್ದೆಲ್ಲ ಬರಲಿ...'